Friday, 27 April 2018

ಆತ್ಮಾವಲೋಕನ

ಆತ್ಮಾವಲೋಕನ

ಬದುಕಿನಲ್ಲಿ ಬಂದದ್ದನ್ನು  ಬಂದಂತೆಯೇ ಸ್ವೀಕರಿಸುವ ರೀತಿ ನನ್ನದು.ಯಾಕೋ ವಿಚಾರಗಳು ಮನಸಲ್ಲಿ ಗೊಂದಲವನ್ನು ಮೂಡಿಸಿ , ಅತಿ ಎನಿಸುವಷ್ಟು ಗಾಬರಿಯನ್ನು ಹುಟ್ಟುಹಾಕುತ್ತವೆ. ಒಮ್ಮೊಮ್ಮೆ ಸೂಕ್ಷ್ಮ ವಿಚಾರಧಾರೆಗಳು  ಎದೆಯಲ್ಲೊಮ್ಮೆ ಕಾಡ್ಗಿಚ್ಚಿನಂತೆ ಉರಿದು, ನನ್ನ ನಂಬಿಕೆಯನ್ನೇ ಬಸ್ಮ ಮಾಡುವುದುಂಟು.ಎಂದಿನಂತೆ ನೀರಸ ಬದುಕು,ಇರುವುದನ್ನು ಬಿಟ್ಟು ಇರದುದರೆಡೆಗೆ ತುಡಿಯುವ ಮನ, ನನ್ನದಲ್ಲದ್ದು ನನ್ನದಾಗಬೇಕೆಂಬ ಸ್ವಾರ್ಥ, ಯೋಗ್ಯವಲ್ಲದ್ದನ್ನು ಪಡೆಯುವ ದುರಾಸೆ.ಯಾಕಿಷ್ಟು ಕ್ಲಿಷ್ಟಕರ ಜೀವನ?? ಯಾರ ಮೆಚ್ಚಿಸಲು!?ಅಂತರಂಗವೆಂಬ ಗುರುವಿಗೆ ಗುಲಾಮನಾಗಿ, ಅವನ ಮೆಚ್ಚುಗೆಯ ಜೀವನ ಅತೀ ವಿರಳ.ನನ್ನ ಮನಸ್ಸಿಚ್ಛೆಯಂತೆ ಬದುಕುತ್ತೇನೆ (My life,My rules)ಎಂದು ಅಂದವರೆಲ್ಲ, ಹಾಗೆ ಬದುಕುವುದಿಲ್ಲ. ಆದರೆ ಒಂದಂತು ಸತ್ಯ, ಕ್ರೂರ ಪ್ರಪಂಚ, ಘೋರ ವಿಧಿ ಮತ್ತು ನೀಚ ಜನರ ನಡುವೆ ಬದುಕು ಬೊಗಸೆಯಲ್ಲಿ ಹಿಡಿದು ನೀಡುತ್ತಿರುವ ಪ್ರೀತಿಗೆ ಋಣಿ ನಾನು.ಬದುಕಿನ ಪುಟ್ಟ ಪುಟ್ಟ ಸಂಭ್ರಮಗಳ ಆಚರಣೆ ಒಂದೆಡೆಯಾದರೆ, ಹೇಳದೆ ಉಳಿದಿಹ ನೂರು ಮಾತಿಗೆ ಮನಸ್ಸಿನ ಪಕ್ಷಿಯ ಆಕ್ರಂದನ ಮುಗಿಲು ಮುಟ್ಟುವುದು ಇನ್ನೊಂದೆಡೆ .ಇಷ್ಟೆಲ್ಲ ಬರೆಯೋ ಹೊತ್ತಿಗೆ, ಮನಸ್ಸು ಮತ್ತೆಲ್ಲಿಗೋ ಹಾರ್ತಿದೆ, ಸಾವಿರ ಸಾವಿರ ಹೊಸ ಆಲೋಚನೆಗಳು....ಮತ್ತೆ ಆ ಆಲೋಚನೆಗಳ ಹಿಂದೆ ಅಲೆದಾಡುವ ಮನಸ್ಸು.🎭   

Sunday, 22 April 2018

ಗೊಂದಲ



ಸಹಸ್ರ ಸಹಸ್ರ ಯಕ್ಷ ಪ್ರಶ್ನೆಗಳು,ಬಿಡದೆ ಕಾಡಿವೆ ಎದೆಯಲ್ಲಿ ಹೆಣಗಾಡಿದೆ ಮನಸ್ಸು ಒಂದೊಂದಕ್ಕೂ ಉತ್ತರ ಹುಡುಕುವಲ್ಲಿ ||
ಇಂದಿಲ್ಲ ನಾಳೆ ಎಲ್ಲಕ್ಕೂ ಉತ್ತರಿಸುವೆ ಎಂಬ ಖಚಿತದಲ್ಲಿ
ಇದೆಲ್ಲದರ ನಡುವೆ ನನ್ನೀ ಮನ ಎಂದೂ ಕೊನೆಗಾಣದ ಗೊಂದಲದಲ್ಲಿ||
                                         


                                                ~ಚಂದನ ಕಶ್ಯಪ್

/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನ...